My Podcast Site
About Me ನನ್ನ ಬಗ್ಗೆ
ನಾನೇ ಹೇಳುವುದಕ್ಕಿಂತ 15-09-2002ರ ವಿಜಯ ಕರ್ನಾಟಕದಲ್ಲಿ ಶ್ರೀವತ್ಸ ಜೋಶಿ ಬರೆದ ಲೇಖನವನ್ನು ಓದಲು
ಇಲ್ಲಿ ಕ್ಲಿಕ್ಕಿಸಿ
Testimonials
1. ವಿ.ಕ. ದಲ್ಲಿ ವಾರದ ಪ್ರತಿಕ್ರಿಯೆಯಾಗಿ ಆಯ್ಕೆಗೊಂಡ ಓದುಗರೊಬ್ಬರ ಪತ್ರ. 2. ನಾನು ಕಾಲೇಜು ಓದುತ್ತಿದ್ದಾಗ, ಅಡಿಕೆ ಮಾರಿದ್ದ ಕೆಲವು ಸಾವಿರ ರೂಪಾಯಿಗಳಷ್ಟು ಹಣ ತರಲೆಂದು ಒಮ್ಮೆ ಮನೆಯವರು ನನ್ನನ್ನು ಅಡಿಕೆ ವ್ಯಾಪಾರಿಯ ಬಳಿ ಕಳಿಸಿದ್ದರು. ಆಗ ಆಲ್ಲಿದ್ದ ಆಢ್ಯ ಮಹನೀಯರೊಬ್ಬರು ಇವನ ಕೈಯಲ್ಲಿ ಇಷ್ಟೊಂದು ಹಣ ಕೊಡಬಹುದೇ ಎಂದು ಅನುಮಾನ ವ್ಯಕ್ತ ಪಡಿಸಿದಾಗ ನನ್ನನ್ನು ಚಿಕ್ಕಂದಿನಿಂದಲೂ ಬಲ್ಲ ಆ ಅಡಿಕೆ ವ್ಯಾಪಾರಿ "ಇಷ್ಟು ಸಾವಿರಗಳೇನು, ನಾನು ಇವನ ಕೈಯಲ್ಲಿ 5 ಲಕ್ಷ ರೂಪಾಯಿ ಬೇಕಾದರೂ ಕೊಡಬಲ್ಲೆ" ಎಂದಿದ್ದರು. ನನ್ನ ಪರಿಚಯವೇ ಇಲ್ಲದ ಓದುಗರೊಬ್ಬರ ಉದ್ಗಾರಗಳು ಹಾಗೂ ನನ್ನನ್ನು ಚಿಕ್ಕಂದಿನಿಂದಲೂ ಬಲ್ಲ ಆ ಅಡಿಕೆ ವ್ಯಾಪಾರಿಯ ಹೇಳಿಕೆ creativity ಹಾಗೂ integrity ಬಗ್ಗೆ valuable Testimonials ಎಂದುಕೊಂಡಿದ್ದೇನೆ!.Sanchar Seva Padak
Sanchar Seva Padak awarded by BSNL